Friday 4 December 2020

ನವೆಂಬರ್ 14, 2020 ಶನಿವಾರ

ನವೆಂಬರ್ 14, 2020 ಶನಿವಾರ                        [ಹಸಿರು]
ಮೊದಲ ವಾಚನ: 3 ಯೊವಾನ್ನ 1: 5-8
ಕೀರ್ತನೆ 112:1-2, 3-4, 5-6. ಶ್ಲೋಕ.1 
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು
ಶುಭಸಂದೇಶ: ಲೂಕ 18.1-8
==================
ಮೊದಲನೇ ವಾಚನ
3 ಯೊವಾನ್ನ 1: 5-8
5 : ಪ್ರಿಯನೇ, ಸಹೋದರರಿಗೆ - ಮುಖ್ಯವಾಗಿ ಅಪರಿಚಿತರಿಗೆ ಸತ್ಕಾರ್ಯವನ್ನು ಮಾಡುವುದರಲ್ಲಿ ನೀನು ತುಂಬಾ ನಿಷ್ಠಾವಂತನು.
6 : ಇಲ್ಲಿಯ ಸಭೆಯ ಮುಂದೆ ಅವರೇ ನಿನ್ನ ಪ್ರೀತ್ಯಾದರವನ್ನು ಪ್ರಶಂಶಿಸಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು.
7 : ವರು ಈ ಸಂಚಾರವನ್ನು ಕೈಗೊಂಡಿರುವುದು ಕ್ರಿಸ್ತಯೇಸುವಿನ ಸೇವೆಗಾಗಿಯೆ. ಅನ್ಯಧವರ್ಿೂಯರಿಂದ ಅವರು ಯಾವ ಸಹಾಯವನ್ನೂ ಸ್ವೀಕರಿಸುವವರಲ್ಲ. ಆದ್ದರಿಂದ, ಇಂಥವರಿಗೆ ನಾವು ನೆರವಾಗಲೇಬೇಕು.
8 : ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು.
===================
ಕೀರ್ತನೆ 112:1-2, 3-4, 5-6. ಶ್ಲೋಕ.1 
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು
1 : ಅಲ್ಲೆಲೂಯ / ಪ್ರಭುವಿನಲಿ 
ಭಯಭಕ್ತಿ ಉಳ್ಳವನು ಧನ್ಯನು / 
ಆತನಾಜ್ಞೆಗಳಲಿ ಹಿಗ್ಗುವವನು 
ಭಾಗ್ಯನು //
2 : ಬಲಿಷ್ಠವಾಗುವುದು ಜಗದೊಳು 
ಅವನ ಸಂತಾನ / 
ಸಜ್ಜನರ ಸಂತತಿ ಪಡೆವುದು 
ಆಶೀರ್ವಚನ //
3 : ಸಿರಿಸಂಪತ್ತಿರುವುದವನ 
ಮನೆಯಲಿ ಸಮೃದ್ಧಿಯಾಗಿ / 
ನೀತಿ ಫಲಿಸುವುದು ಆತನ 
ಮನದಲಿ ಶಾಶ್ವತವಾಗಿ //
4 : ಸಜ್ಜನನಿಗೆ ಮೂಡುವುದು 
ಜ್ಯೋತಿ ಕತ್ತಲೊಳು / 
ನ್ಯಾಯಪ್ರಿಯನು ಆತ, 
ದಯಾವಂತ, ಕೃಪಾಳು //
5 : ದಯೆತೋರಿ ಧನಸಹಾಯ 
ಮಾಡುವವನು ಭಾಗ್ಯವಂತ / 
ನ್ಯಾಯದಿಂದ ವ್ಯವಹರಿಸುವಂಥಾ 
ಮನುಜನು ಭಾಗ್ಯವಂತ //
6 : ಅಚಲನಾಗಿರುವನು ನೀತಿವಂತನು / 
ಮರೆಯಲಾರರು ಎಂದಿಗೂ ಆತನನು //
===================
ಶುಭಸಂದೇಶ
ಲೂಕ 18.1-8
1 : ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು:
2 : “ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ.
3 : ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು.
4 : ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ;
5 : ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.”
6 : ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ?
7 : ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ?
8 : ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?” ಎಂದರು. ಫರಿಸಾಯನು ಮತ್ತು ಸುಂಕದವನು
===================
ಚಿಂತನೆ
ಇಂದಿನ ಸಾಮತಿಯಲ್ಲಿ ಬರುವ  ವಿಧವೆ ಬಡವರ ಮತ್ತು ಶೋಷಿತರ ಪ್ರತಿನಿಧಿಯಂತಿದ್ದಾಳೆ. ಸಹಜವಾಗಿ ಇಂತವರಿಗೆ ನ್ಯಾಯ ಸಿಗುವುದು ದೂರದ ಮಾತೇ. ಆದರೆ ಈ ವಿಧವೆಯಲ್ಲಿ ಒಂದು ಅಸ್ತ್ರವಿತ್ತು, ಅದು ಅವಳ ಸಹನೆ ಎಂದೇ  ಕೊನೆಗೆ ಅವಳಿಗೆ ನ್ಯಾಯ ಸಿಕ್ಕಿದ್ದು ಈ ಅಸ್ತ್ರದಿಂದಲೇ. ದೇವರು ಪ್ರೀತಿಸ್ವರೂಪಿ, ಕರುಣಾಮಯಿ, ತನ್ನ ಜನರು ಹಗಲು ರಾತ್ರಿ ಮೊರೆಯಿಡುವಾಗ ಅದನ್ನು ಹೇಗೆ ನಿರ್ಲಕ್ಷಿಸಬಲ್ಲರು? ಸಹನೆ ಮತ್ತು ವಿಶ್ವಾಸದಿಂದ ಮೊರೆಯಿಡುವವರ ಕೂಗನ್ನು ದೇವರು ಎಂದಿಗೂ ತಳ್ಳಿಬಿಡುವುದಿಲ್ಲ. ತನ್ನ ಹಟಮಾರಿತನದಿಂದ ಒಂದು ವಿಧವೆಯ ನ್ಯಾಯಾಧೀಶನನ್ನೇ  ಸೋಲಿಸಿದ್ದರೆ ಕರುಣಾಮಯ ದೇವರ ಮನವನ್ನು ನಮ್ಮ ಒತ್ತಾಯದ ಪ್ರಾರ್ಥನೆಯು ಕರಗಿಸಲಾರದೆ?  
==================="


No comments:

Post a Comment