Friday 4 December 2020

ನವೆಂಬರ್ 20, 2020 ಶುಕ್ರವಾರ

 ನವೆಂಬರ್ 20, 2020 ಶುಕ್ರವಾರ [ಹಸಿರು]
ಮೊದಲ ವಾಚನ: ಯೊವಾನ್ನನ ಪ್ರಕಟನೆ 10.8-11
ಕೀರ್ತನೆ 119:14, 24, 72, 103, 111, 131, ಶ್ಲೋಕ.103
ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ
ಶುಭಸಂದೇಶ: ಲೂಕ 19.45-48
==========
ಮೊದಲನೇ ವಾಚನ
===============
ಯೊವಾನ್ನನ ಪ್ರಕಟನೆ 10.8-11
8 : ಸ್ವರ್ಗದಿಂದ ನನಗೆ ಕೇಳಿಸಿದ್ದ ಧ್ವನಿ ಮತ್ತೊಮ್ಮೆ ನನ್ನೊಡನೆ ಮಾತನಾಡಿ, “ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ಕಾಲಿಟ್ಟು ನಿಂತಿರುವ ದೇವದೂತನ ಬಳಿಗೆ ಹೋಗು. ಆತನ ಕೈಯಲ್ಲಿರುವ ತೆರೆದ ಸುರುಳಿಯನ್ನು ತೆಗೆದುಕೋ,” ಎಂದು ತಿಳಿಸಿತು.
9 : ನಾನು ಆ ದೇವದೂತನ ಬಳಿಗೆ ಹೋಗಿ, “ಆ ಚಿಕ್ಕ ಸುರುಳಿಯನ್ನು ನನಗೆ ಕೊಡು,” ಎಂದು ಕೇಳಿದೆ. ಅವನು, “ತೆಗೆದುಕೋ, ಇದನ್ನು ತಿನ್ನು. ಇದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿಯೂ ನಿನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿಯೂ ಇರುತ್ತದೆ,” ಎಂದನು.
10 : ಅಂತೆಯೇ, ನಾನು ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ತೆಗೆದುಕೊಂಡು ತಿಂದೆ. ಅದು ನನ್ನ ಬಾಯಲ್ಲಿ ಜೇನುತುಪ್ಪದಂತೆ ಸಿಹಿಯಾಗಿತ್ತು. ಆದರೆ ಅದನ್ನು ತಿಂದಮೇಲೆ ನನ್ನ ಹೊಟ್ಟೆಯೆಲ್ಲಾ ಕಹಿಯಾಯಿತು.
11 : ಅನಂತರ, ದೇವದೂತನು ನನಗೆ, “ನೀನು ಇನ್ನೂ ಅನೇಕ ಜನರ, ಜನಾಂಗಗಳ, ಭಾಷೆಗಳನ್ನಾಡುವವರ ಹಾಗು ಅರಸರಾದವರ ವಿರುದ್ಧ ಪ್ರವಾದನೆಯನ್ನು ಸಾರಬೇಕು,” ಎಂದು ಆಜ್ಞಾಪಿಸಿದನು.
===================
ಕೀರ್ತನೆ 
ಕೀರ್ತನೆ 119:14, 24, 72, 103, 111, 131, ಶ್ಲೋಕ.103
ಶ್ಲೋಕ: ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ||
14 : ಸಿರಿಸಂಪತ್ತಿಗಿಂತ ಮಿಗಿಲಾಗಿ / 
ಆನಂದಿಪೆ ನಿನ್ನ ಮಾರ್ಗಿಯಾಗಿ //
24 : ನಿನ್ನಾಜ್ಞೆಯು ಆನಂದದಾಯಕ / 
ಅವೇ ನನಗೆ ಮಂತ್ರಾಲೋಚಕ //
 72 : ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ / 
ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ //
103 : ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ / 
ಜೇನುತುಪ್ಪಕ್ಕಿಂತ ಸಿಹಿ ನನ್ನ ಬಾಯಿಗೆ //
111 : ಹೃದಯಾನಂದಕರ ನಿನ್ನ ಕಟ್ಟಳೆಗಳು / 
ನನಗಮರ ಸ್ವಾಸ್ತ್ಯವಾದುವುವು ಅವು ಗಳು //
131 : ಬಾಯ್ದೆರೆದು ಹಾತೊರೆಯುತಿರುವೆ / 
ನಿನ್ನ ಆಜ್ಞೆಗಳನು ಅರಸುತಿರುವೆ //
===================
ಶುಭಸಂದೇಶ
ಲೂಕ 19.45-48
45 : ಅನಂತರ ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ,
46 : “ ‘ಪ್ರಾರ್ಥನಾಲಯವೀ ನನ್ನ ಆಲಯ!’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ,” ಎಂದರು.
47 : ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು. ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು.
48 : ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನೂ ಕೇಳಲು ಆತುರರಾಗಿದ್ದರು. ಯೇಸುವಿನ ಅಧಿಕಾರ ದೈವದತ್ತವೆ?
===================
ಚಿಂತನೆ
ಯೇಸು ಕೊನೆಯ ಬಾರಿ ದೇವಾಲಯವನ್ನು ಪ್ರವೇಶಿಸುತ್ತಾರೆ. ಕಡೆಯ ಬಾರಿ ಪ್ರವೇಶಿಸಿದ ಯೇಸು ದೇವಾಲಯದ ಶುದ್ದತೆಗೆ ಮುಂದಾಗುತ್ತಾರೆ. ದೇವಾಲಯ ಪ್ರಾರ್ಥನಾ ಮಂದಿರ ಅಲ್ಲಿ ಕೇವಲ ಆಧ್ಯಾತ್ಮಿಕತೆಗೆ ಪ್ರಾಧಾನ್ಯ ನೀಡಬೇಕು. ಪ್ರಾರ್ಥನಾ ಮಂದಿರ ದೇವರ ಅನುಭವವನ್ನು ನೀಡಬೇಕು. ಯೆಹೂದ್ಯರಿಗೆ ಇದ್ದದು  ಒಂದೇ ಒಂದು ದೇವಾಲಯ ಅದು ಅವರ ಪುಣ್ಯಕ್ಷೇತ್ರವೂ ಆಗಿತ್ತು.. ದೇವರೆ ಜನರ ನಡುವೆ ಜೀವಿಸುತ್ತಿದ್ದಾರೆಂದು ಯೆಹೂದ್ಯರು ನಂಬಿದ್ದರು. ಆದರೆ ಆ ಮಹಾದೇವಾಲಯದಲ್ಲಿ ದೇವರ ಮತ್ತು ಧರ್ಮದ ಹೆಸರಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿತ್ತು. ಬಡವರ ಮತ್ತು ಯಾತ್ರಿಕರ ಸುಲಿಗೆ ನಡೆಯುತ್ತಿತ್ತು. ನಾಣ್ಯ ವಿನಿಮಯದ ಹಾಗೂ ದಹನ ಬಲಿ ಪ್ರಾಣಿಗಳ ಹೆಸರಲ್ಲಿ  ಹಣ ವಸೂಲಿ ಮಾಡುತ್ತಿದ್ದರು. ಯೇಸು ಅವರ ಶೋಷಣೆಯನ್ನು ತೀವ್ರವಾಗಿ ಖಂಡಿಸುತ್ತಾರೆ ಮತ್ತು ಚಾಟಿ ಬೀಸುತ್ತಾರೆ. ಇಂದಿನ ನಮ್ಮ ಪುಣ್ಯಕ್ಷೇತ್ರಗಳ ಮತ್ತು ಮಹಾದೇವಾಲಯಗಳ ಸ್ಥಿತಿಯ ಕುರಿತು ಅವಲೋಕನ ಮಾಡಬೇಕಿದೆ.
===================


No comments:

Post a Comment