Monday, 2 March 2020

ತಪಸ್ಸು ಕಾಲದ ಮೊದಲನೆಯ ಗುರುವಾರ

ಮಾರ್ಚ್ 5, 2020 ಗುರುವಾರ [ನೇರಳೆ]
ಮೊದಲ ವಾಚನ: ಎಸ್ತೆರ್ 3:12, 15-16, 23-25
ಕೀರ್ತನೆ 138:1-3, 7-8, ಶ್ಲೋಕ.3
ಸರ್ವೇಶ್ವರಾ, ಮೊರೆಯಿಟ್ಟಾಗ ದಯಪಾಲಿಸಿದೆ ಎನಗೆ ಸದುತ್ತರವನು
ಶುಭಸಂದೇಶ: ಮತ್ತಾಯ 7.7-12
----------------------
ಮೊದಲನೆಯ ವಾಚನ: ಎಸ್ತೇರ 14: 1214-16, 23-25
ಮರಣಭಯದಿಂದ ಕಂಗೆಟ್ಟ ರಾಣಿ ಎಸ್ತೇರಳು ಸರ್ವೇಶವರನ ಆಶ್ರಯವನ್ನು ಕೋರಿದಳು. ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತಾ ಈ ಪರಿ ಮೊರೆಯಿಟ್ಟಳು: “ನನ್ನ ಸರ್ವೇಶ್ವರಾ, ಅರಸನೇ, ತಾವೊಬ್ಬರೇ ದೇವರು ಒಬ್ಬಂಟಿಗಳು ನಾನು, ತಾವೇ ನನಗೆ ನೆರವು, ನನ್ನ ಪ್ರಾಣಕ್ಕೆ ಗಂಡಾಂತರ ಬಂದಿಹ ಈ ವೇಳೆಯಲಿ ತಮ್ಮನ್ನಲ್ಲದೆ ಯಾರನ್ನು ಆಶ್ರಯಿಸಲಿ? ತಾವಾರಿಸಿಕೊಂಡಿರಿ ಸಕಲ ರಾಷ್ಟ್ರಗಳಿಂದ ಇಸ್ರಯೇಲನ್ನು ತಮ್ಮ ಪ್ರಜೆಯಾಗಲು ಪ್ರತ್ಯೇಕಿಸಿದಿರಿ, ನಮ್ಮ ಪೂರ್ವಜರನ್ನು, ತಪ್ಪದೆ ಈಡೇರಿಸಿದಿರಿ ತಮ್ಮ ವಾಗ್ದಾನಗಳನ್ನು ಕುಟುಂಬದವರಿಂದ ಬಾಲ್ಯದಿಂದಲೇ ನಾ ಕಲಿತ ಈ ಪಾಠವನ್ನು, ಸರ್ವೇಶ್ವರಾ, ನಮ್ಮನ್ನು ತಂದುಕೊಳ್ಳಿ ನೆನಪಿಗೆ ಆಪತ್ತಿನಲ್ಲಿ ನೆರವಿತ್ತು ಧೈರ್ಯನೀಡಿ  ನಮಗೆ ರಾಜಾಧಿರಾಜ, ಒಡೆಯ ತಾವು ಸಕಲ ದೇವರುಗಳಿಗೆ. ಕರುಣಿಸಿ, ಸಿಂಹರಾಜನ ಮುಂದೆ ನಿಂತು ನಾ ವಾದಿಸುವಂತೆ ಈ ರಾಜನು ಶತ್ರು ಹಾಮಾನನನ್ನು ದ್ವೇಷಿಸುವಂತೆ ಆ ಶತ್ರು ಹಾಗು ಅವನ ಸಂಗಡಿಗರು ನಾಶವಾಗುವಂತೆ, ಸರ್ವೇಶ್ವರಾ, ಈಕ್ಷಿಸಿ ನೆರವಿತ್ತು ಈ ಒಬ್ಬಂಟಿಗಳಿಗೆ, ಯಾರನ್ನು ಆಶ್ರಯಿಸಲಿ ನಾನು, ತಮ್ಮನ್ನಲ್ಲದೆ?
-------------------------
ಕೀರ್ತನೆ 138: 1-2, 2-3, 7-8
ಸರ್ವೇಶ್ವರಾ, ಮೊರೆಯಿಟ್ಟಾಗ ಪ್ರಭುದಯಪಾಲಿಸಿದೆ ಎನಗೆ ಸದುತ್ತರವನು
1: ಹೃದಯಪೂರ್ವಕ ವಂದನೆ ಪ್ರಭು ನಿನಗೆ ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ
2: ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ ನಿನ್ನ ಪ್ರೀತಿಸತ್ಯತೆಗಳನಾಮ ನುಡಿಗಳ ಮಹತ್ವದ ಪ್ರಯುಕ್ತ
3: ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು
7: ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭುಪ್ರಾಣವನು ಶತ್ರುಕೋಪಕೆ ವಿರುದ್ಧವಾಗಿ ತೋರುವೆ ನೀ ಮುಷ್ಟಿಯನು
8: ಸಿದ್ಧಿಗೆ ತರುವೆ ನೀ ಪ್ರಭುನನ್ನ ಕಾರ್ಯವನು ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು ಮರೆತುಬಿಡಬೇಡ ನಿನ್ನಯ ಕೈ ಕೃತಿಯನು
-------------------------
ಶುಭಸಂದೇಶ: ಮತ್ತಾಯ 7: 7-12
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಕೇಳಿರಿನಿಮಗೆ ಕೊಡಲಾಗುವುದುಹುಡುಕಿರಿನಿಮಗೆ ಸಿಗುವುದುತಟ್ಟಿರಿನಿಮಗೆ ಬಾಗಿಲು ತೆರೆಯಲಾಗುವುದು. 8ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡಲಾಗುವುದುಹುಡುಕುವವನಿಗೆ ಸಿಗುವುದುತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. 9ನಿಮ್ಮಲ್ಲಿ ಯಾವನು ತಾನೇ ತನ್ನ ಮಗ ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಟ್ಟಾನು? 10ವಿನನ್ನು ಕೇಳಿದರೆ ಹಾವನ್ನು ಕೊಟ್ಟಾನು? 11ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆಅದಕ್ಕಿಂತಲೂ ಎಷ್ಟೋ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಒಳ್ಳೆಯ ಕೊಡುಗೆಗಳನ್ನು ಕೊಡಬಲ್ಲರು!"12 "ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋಅದನ್ನೇ ನೀವು ಅವರಿಗೆ ಮಾಡಿಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ. "
---------------------------
ಚಿಂತನೆ: ಎಸ್ತೆರಳ ಪ್ರಾರ್ಥನೆಯನ್ನು ದೇವರು ಪರಾಂಬರಿಸಿದರು. ಏಕೆಂದರೆ ಆಕೆಯಲ್ಲಿದ್ದ ಅಚಲ ವಿಶ್ವಾಸ. ವಿಶ್ವಾಸದಿಂದ ವಿನಂತಿಸಿದರೆ ದೇವರು ಕಂಡಿತವಾಗಿಯೂ ಭಕ್ತನ ಬೇಡಿಕೆಯನ್ನು ಕರುಣಿಸುವರು ಎನ್ನುತ್ತಾರೆ ಪ್ರಭು ಯೇಸು. ನಾವು ಪರರಿಗೆ ಯಾವಾಗಲೂ ಒಳಿತನ್ನು ಬಯಸಬೇಕು. ಆಗ ನಮಗೂ ಒಳಿತಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎನ್ನುತ್ತಾರೆ ಪ್ರಭು. 
--------------
ಇಂದಿನ ಶುಭಸಂದೇಶ ದೇವರ ಉದಾರತ್ವವನ್ನು, ಒಳ್ಳೆಯತನವನ್ನು ತಿಳಿಸುತ್ತದೆ. ದೇವರು ನಮ್ಮೆಲ್ಲರ ಪ್ರೀತಿಯ ತಂದೆ ಮತ್ತು ನಮ್ಮ ಅಗತ್ಯಗಳನ್ನು ಪೂರೈಸುವವರಾಗಿದ್ದಾರೆ. ಯೇಸುವಿನ ಹಿಂಬಾಲಕರು ದೇವರನ್ನೇ ಆಶ್ರಯಿಸಿರುವುದರಿಂದ ದೇವರು ಅವರನ್ನು ಎಂದಿಗೂ ಕೈ ಬಿಡರು ಎಂಬ ಅಭಯವನ್ನು ನೀಡುತ್ತಾರೆ. ವಿಶ್ವಾಸದ ಪ್ರಾರ್ಥನೆಗೆ ತಕ್ಕ ಪ್ರತಿಫಲ ದೊರಕುವುದೆಂದು ಹಾಗೂ ಒಂದು ನಿಬಂಧನೆಯನ್ನು ಸೂಚಿಲಾಗಿದೆ. ``ನೀನು ಜನರಿಂದ ಏನನ್ನು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಆವರಿಗೆ ಮಾಡಿ’’, ಸಾಮಾನ್ಯವಾಗಿ ನಾವು ಜನರಿಂದ ಉತ್ತಮವಾದುದನ್ನೇ ಬಯಸಿದಾಗ ಮಾತ್ರ ದೇವರು ನಮಗೂ ಕರುಣಿಸುತ್ತಾನೆ ಎಂಬುದೇ ಯೇಸು ಹೇಳುವ ನಿಬಂಧನೆ.
--------------------

© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment