Thursday, 26 November 2020

ಅಕ್ಟೋಬರ್ 14, 2020 ಬುಧವಾರ

 ಅಕ್ಟೋಬರ್ 14, 2020 ಬುಧವಾರ                        [ಹಸಿರು]

ಸಂತ ಕಲ್ಲಿಸ್ತಸ್  I , ವಿಶ್ವಗುರು ಮತ್ತು ರಕ್ತಸಾಕ್ಷಿ (ಐಚ್ಛಿಕ ಸ್ಮರಣೆ)

ಮೊದಲ ವಾಚನ: ಗಲಾತ್ಯರಿಗೆ 5.18-25

ಕೀರ್ತನೆ 1: 1-2, 3, 4, 6. ಶ್ಲೋಕ.ಯೊವಾನ್ನ 8:12

ನಾನೇ ಜಗಜ್ಜ್ಯೋತಿಯು, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ

ಶುಭಸಂದೇಶ: ಲೂಕ 11.42-46

==================

ಮೊದಲನೇ ವಾಚನ

===============

ಗಲಾತ್ಯರಿಗೆ 5.18-25

18 : ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ.

19 : ದೈಹಿಕ ವ್ಯಾಮೋಹದ ದುಷ್ಪರಿಣಾಮಗಳು ತಿಳಿದೇ ಇವೆ: ಹಾದರ, ಅಶುದ್ಧತೆ, ಕಾಮುಕತನ,

20 : ವಿಗ್ರಹಾರಾಧನೆ, ಮಾಟಮಂತ್ರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕ್ರೋಧ, ಸ್ವಾರ್ಥಭೇದ, ಪಕ್ಷಪಾತ, ಮತ್ಸರ, ಕುಡುಕತನ, ದುಂದೌತಣ - ಇತ್ಯಾದಿಗಳು.

21 : ಇಂಥ ಕೃತ್ಯಗಳನ್ನು ಮಾಡುವವರು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ ಎಂದು ಈಗಾಗಲೇ ನಿಮ್ಮನ್ನು ಎಚ್ಚರಿಸಿದ್ದೇನೆ; ಈಗಲೂ ಎಚ್ಚರಿಸುತ್ತೇನೆ.

22 : ಪವಿತ್ರಾತ್ಮದತ್ತವಾದ ಸತ್ಫಲಗಳು ಯಾವುದೆಂದರೆ: ಪ್ರೀತಿ, ಆನಂದ, ಶಾಂತಿಸಮಾಧಾನ, ಸಹನೆ, ದಯೆ, ಸದ್ಗುಣ, ಪ್ರಾಮಾಣಿಕತೆ, ಸೌಜನ್ಯ, ಸಂಯಮ - ಇಂಥವುಗಳೇ.

23 : ಇವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವುದಿಲ್ಲ.

24 : ಕ್ರಿಸ್ತಯೇಸುವಿಗೆ ಸೇರಿದ ಎಲ್ಲರೂ ತಮ್ಮ ದೈಹಿಕ ವ್ಯಾಮೋಹವನ್ನು, ಅದರ ಆಶಾಪಾಶಗಳ ಹಾಗೂ ದುರಿಚ್ಛೆಗಳ ಸಮೇತ ಶಿಲುಬೆಗೆ ಜಡಿದುಬಿಟ್ಟಿದ್ದಾರೆ

25 : ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು.

===================

ಕೀರ್ತನೆ 

ಕೀರ್ತನೆ 1: 1-2, 3, 4, 6. ಶ್ಲೋಕ.ಯೊವಾನ್ನ 8:12

ನಾನೇ ಜಗಜ್ಜ್ಯೋತಿಯು, 

ನನ್ನನ್ನು ಹಿಂಬಾಲಿಸುವವನು 

ಕತ್ತಲಲ್ಲಿ ನಡೆಯುವುದಿಲ್ಲ, 

ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ


1 : ದುರ್ಜನರ ಆಲೋಚನೆಯಂತೆ 

ನಡೆಯದೆ / 

ಪಾಪಾತ್ಮರ ಪಥದಲಿ 

ಕಾಲೂರದೆ / 

ಧರ್ಮನಿಂದಕರ ಕೂಟದಲಿ 

ಕೂರದೆ //


2 : ಪ್ರಭುವಿನ ಧರ್ಮಶಾಸ್ತ್ರದಲಿ 

ಹರ್ಷಗೊಳ್ಳುವವನಾರೋ - ಅವನೇ ಧನ್ಯನು/ 

ಹಗಲಿರುಳೆನ್ನದೆ ಅದನೆ 

ಧ್ಯಾನಿಸು ತಿರುವವನಾರೋ - 

ಅವನೇ ಧನ್ಯನು //


3 : ನದಿಯ ಬದಿಯಲೇ 

ಬೆಳೆದಿಹ ಮರದಂತೆ / 

ಸಕಾಲಕೆ ಫಲವೀವ 

ವೃಕ್ಷದಂತೆ / 

ಎಲೆಬಾಡದೆ ಪಸಿರಿರುವ 

ತರುವಂತೆ / 

ಸಿಗುವುದು ಅವನ 

ಕಾರ್ಯಗಳಿಗೆ ಸಫಲತೆ //


4 : ದುರುಳರಾದರೊ 

ತೂರಿ ಹೋಗುವರು / 

ಬಿರುಗಾಳಿಗೆ 

ತರಗೆಲೆಯಾಗುವರು //


6 : ಸಜ್ಜನರ ಮಾರ್ಗಕ್ಕಿದೆ 

ಪ್ರಭುವಿನ ಪಾಲನ / 

ದುರ್ಜನರ ಮಾರ್ಗಕ್ಕಿದೆ 

ಸಂಪೂರ್ಣ ವಿನಾಶನ //

===================

ಶುಭಸಂದೇಶ

ಲೂಕ 11.42-46

42 : “ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು.

43 : “ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ.

44 : ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.

45 : ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು.

46 : ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರು ಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ.

===================

ಚಿಂತನೆ

======

ಯಾಜಕಕಾಂಡ 27:30, ಧ.ಕಾಂಡ 14:22, ಜಕರೀಯ 7:9, ಮೀಕ 6:8ರ ಪ್ರಕಾರ ಆದಾಯದಲ್ಲಿ ಸ್ವಲ್ಪ ಪಾಲನ್ನು ದೇವಾಲಯಕ್ಕೆ ನೀಡಬೇಕೆಂದು ಆಜ್ಞೆಯಿದೆ. ಈ ಆದಾಯದ ಸ್ವಲ್ಪ ಪಾಲನ್ನು ತೆರೆಗೆ ರೂಪದಲ್ಲಿ ಭೂಮಿಯ ಮೇಲೆ ಧಾನ್ಯ, ಎಣ್ಣೆ, ನವ ದ್ರಾಕ್ಷರಸ ಮತ್ತು ಹಣ್ಣುಗಳು ಹಾಗೂ ದನಕರುಗಳ ಮೇಲೆ ಹೇರಲಾಗಿತ್ತು. ಯಾ.ಕಾಂಡ 18:20, ಧ.ಕಾಂಡ 14:28, 26:12ರ ಪ್ರಕಾರ ಯಾಜಕರ ಮತ್ತು ಬಡವರ ಪೋಷಣೆಗಾಗಿ ಆದಾಯದ ಸ್ವಲ್ಪ ಪಾಲನ್ನು ನೀಡಬೇಕೆಂದು ಸೂಚಿಸುತ್ತದೆ. ಯೇಸು ಈ ಪದ್ಧತಿಗಳನ್ನು ಖಂಡಿಸುತ್ತಿಲ್ಲ. ಜನರಿಂದ ನಿರ್ದಾಕ್ಷಿಣ್ಯದಿಂದ ದಶಾಂಶವನ್ನು ವಸೂಲಿ ಮಾಡುವುದನ್ನು ಖಂಡಿಸುತ್ತಾರೆ. ಅತ್ಯಲ್ಪ, ಚಿಕ್ಕ ವಿಷಯ, ಕಾನೂನು, ಕಟ್ಟಳೆಗಳಿಗಿಂತ ದಯೆ, ಕನಿಕರ, ಪ್ರಾಮಾಣಿಕತೆಗೆ ಆಧ್ಯತೆ ನೀಡಬೇಕೆಂದು ಯೇಸು ಆದೇಶಿಸುತ್ತಾರೆ.

===================

No comments:

Post a Comment